ದರ್ಶನ್ ಜೈಲಲ್ಲಿದ್ದುಕೊಂಡಿದ್ದರೂ.. ವರ್ತನೆಯಲ್ಲೇನೂ ಚೇಂಜ್ ಆಗಿಲ್ಲ. ಜೈಲಿಗೆ ಹೋಗೋ ಮೊದಲು ಏನ್ ರೀ ಮೀಡಿಯಾ ಎಂದೇ ಪ್ರಶ್ನೆ ಮಾಡ್ತಿದ್ದ ದರ್ಶನ್, ಕೊಲೆ ಕೇಸಿನಲ್ಲಿ ಜೈಲು ಸೇರಿದ್ದರೂ ಅಹಂಕಾರದ ವರ್ತನೆ ಬಿಟ್ಟಿಲ್ಲ. ದರ್ಪ ದೌಲತ್ತು ಕಿಂಚಿತ್ತೂ ಕಡಿಮೆ ಆಗಿಲ್ಲ. ದೌಲತ್ತೂ ಕಡಿಮೆಯಾಗಿಲ್ಲ ಎಂದು ಮೀಡಿಯಾಗಳು ಆರೋಪಿಸುತ್ತಿವೆ. ದರ್ಶನ್ ಅವರ ಮೇಲೆ ಮುಗಿಬಿದ್ದಿರೋ ಮೀಡಿಯಾ ಹಾಗೂ ಟಿವಿ ಚಾನೆಲ್ಲುಗಳು ಇನ್ನಷ್ಟು ಕೆರಳುವಂತೆ ಮಿಡ್ಲ್ ಫಿಂಗರ್. ಆಗಿದ್ದೇನಂತೆ..ಬಳ್ಳಾರಿ ಜೈಲಲ್ಲಿರುವ ದರ್ಶನ್ ಅವರನ್ನು ಪತ್ನಿ ವಿಜಯಲಕ್ಷ್ಮಿ ಮತ್ತು ತಮ್ಮ ದಿನಕರ್ ಭೇಟಿ ಮಾಡಿದ್ದರು. ಅವರನ್ನು ಮಾತನಾಡಿಸಿ ವಾಪಸ್ ಕಳುಹಿಸುತ್ತಿದ್ದಾಗ.. ಮೀಡಿಯಾದವರು ಜೈಲಿನ ಗೇಟಿನಿಂದ ಕ್ಯಾಮೆರಾ ಹಿಡಿದಿದ್ದರು. ಕ್ಯಾಮೆರಾಗಳು ಶೂಟಿಂಗ್ ಮಾಡ್ತಿರೋವಾಗಲೇ ದರ್ಶನ್ ತಮ್ಮ ಮಧ್ಯದ ಬೆರಳು ತೋರಿಸಿದ್ದರು. ಮಧ್ಯದ ಬೆರಳು ತೋರಿಸುವುದರ ಅರ್ಥ ವಾಸ್ತವದಲ್ಲಿ ಕೆಟ್ಟ ಅರ್ಥ, ಅಸಹ್ಯ ಸಂದೇಶ ಕೊಡುತ್ತದೆ. ಹೀಗಾಗಿ ಮಾಧ್ಯಮಗಳೆಲ್ಲ ದರ್ಶನ್ ವಿರುದ್ಧ ಮುಗಿಬಿದ್ದಿದ್ದವು.
ಇದಕ್ಕೆಲ್ಲ ಉತ್ತರ ನೀಡಿರುವ ಡಿ ಕಂಪೆನಿ ಸ್ಪಷ್ಟನೆ ನೀಡಿದೆ.
ಡಿ ಕಂಪೆನಿ ಸ್ಪಷ್ಟನೆ ಏನು..?
ಡಿ ಕಂಪೆನಿ ಪೇಜಿನಲ್ಲಿ ದರ್ಶನ್ ಅವರು ಮಾಧ್ಯಮಗಳಿಗೆ ಕೆಟ್ಟದಾಗಿ ಕೈ ಸನ್ನೆ ಮಾಡಲಿಲ್ಲ. ಬದಲಿಗೆ ವಿಘ್ನ ಹರ ಮುದ್ರಾ ಮಾಡಿಕೊಂಡು ಬಂದಿದ್ದಾರೆ ಅಷ್ಟೇ ಎನ್ನುತ್ತಿರುವ ಡಿ ಕಂಪೆನಿ ʻʻಮಾಧ್ಯಮಗಳು ನಮ್ಮ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅವರ ವಿರುದ್ಧ ಸುಖಾಸುಮ್ಮನೆ ಇಲ್ಲಸಲ್ಲದ ವಿಚಾರಗಳನ್ನು ಪ್ರಚೋದಿಸಿ ಮನಬಂದಂತೆ ಸುದ್ದಿ ಬಿತ್ತರಿಸುತ್ತಿವೆ. ತೇಜೋವಧೆ ಮಾಡುತ್ತಿವೆ. ಡಿ ಬಾಸ್ರವರು ನಡೆದು ಕೊಂಡು ಬರುವಾಗ ವಿಘ್ನ ಹರ ಮುದ್ರಾ ಮಾಡಿಕೊಂಡು ನಡೆದುಕೊಂಡು ಬಂದಿದ್ದನ್ನು ಏನೋ ಅಸಭ್ಯವಾಗಿ ತೋರಿಸಿದರು ಎಂದು ಬಿತ್ತರಿಸುತ್ತಿರುವ ನಿಮಗೆ ನಮ್ಮ ಧಿಕ್ಕಾರ. ಕೆಲ ಮಾಧ್ಯಮಗಳು ಸತ್ಯ ಹೇಳೊದು ನಾವೇ ಉತ್ತಮ ಸಮಾಜ ಕಟ್ಟೊದು ನಾವೇ ನಮ್ಮಿಂದಲೇ ಎಲ್ಲಾ ಅಂತಾ ಬೊಗಳೆ ಬಿಡುವ ಅವರಿಗೆ ಸತ್ಯಾಂಶ ತೋರಿಸದೆ ಮತ್ತೊಬ್ಬರ ಮೇಲೆ ಗೊಬೆ ಕೂರಿಸಿ ಇಲ್ಲ ಸಲ್ಲದ ಸುಳ್ಳುಗಳನ್ನು ತೋರಿಸಿ ಜನರ ದಿಕ್ಕು ತಪ್ಪಿಸಿದಾಗ ಮಾತ್ರ ಹೈಫೈ ಆಫೀಸ್ ಹೈಫೈ ಲೈಫ್ʼʼ ಎಂದು ಟೀಕಿಸಿದೆ.
ಡಿ ಕಂಪೆನಿ ಎನ್ನುವುದು ನಟ ದರ್ಶನ್ ಅಧಿಕೃತ ಅಭಿಮಾನಿ ಸಂಘ ಡಿ ಕಂಪನಿ ಸೋಶಿಯಲ್ ಮೀಡಿಯಾ ಖಾತೆ. ಆ ಪೇಜಿನಲ್ಲಿ ದಿನಕರ್ ತೂಗುದೀಪ ಸಹ ಇದ್ದಾರೆ. ಡಿ ಕಂಪೆನಿ ಹೇಳಿದ್ದನ್ನೆಲ್ಲ ನಂಬಬೇಕಾ..? ಇಷ್ಟಕ್ಕೂ ವಿಘ್ನ ಹರ ಮುದ್ರೆ ಎನ್ನುವುದು ಇದೆಯಾ.. ಎಂದು ಹುಡುಕಿದರೆ, ಹೌದು ಎಂಬ ಉತ್ತರ ಬರುತ್ತದೆ. ವಿಘ್ನ ಹರ ಮುದ್ರೆ ಎನ್ನುವುದು ಗಣೇಶ ಮುದ್ರೆ ಎಂದೇ ಪ್ರಸಿದ್ಧಿ ಪಡೆದಿದೆ.
ವಿಘ್ನ ಹರ ಮುದ್ರೆ ಹೇಗೆ ಮಾಡ್ತಾರೆ..?
ಇದು ಖ್ಯಾತವಾಗಿರುವುದು ಗಣೇಶ ಮುದ್ರೆ ಎಂಬ ಹೆಸರಿನಲ್ಲಿ. ಆದರೆ, ಈ ಮುದ್ರೆಯಲ್ಲಿ ಅಗ್ನಿಯೂ ಇರುತ್ತದೆಯಾದ್ದರಿಂದ ಇದು ವಿಘ್ನ ಹರ ಗಣೇಶ ಮುದ್ರೆ ಎಂಬ ಹೆಸರನ್ನೂ ಪಡೆದುಕೊಂಡಿದೆ.
ಅಂಗೈಗಳನ್ನು ಅಗಲಿಸಿ.. ಬೆರಳುಗಳನ್ನು ದೂರ ದೂರವಾಗಿಟ್ಟು ಮಾಡುವ ಒಂದು ವಿಧದ ಯೋಗ ಮುದ್ರೆ. ಮೊದಲು ಅಂಜಲಿ ಮುದ್ರೆಯನ್ನು ಮಾಡಿಕೊಳ್ಳಬೇಕು. ಅಂದರೆ ಎರಡೂ ಅಂಗೈ, ಬೆರಳುಗಳು ವಿರುದ್ಧ ದಿಕ್ಕಿನಲ್ಲಿ ನೋಡುತ್ತಿರುವಂತೆ ಮಾಡಿಕೊಳ್ಳಬೇಕು. ಬಲ ಭಾಗದ ಅಂಗೈ, ದೇಹದ ಹತ್ತಿರ ಬರುವಂತೆ, ಎಡ ಭಾಗದ ಅಂಗೈ ದೇಹದ ವಿರುದ್ಧ ದಿಕ್ಕಿನಲ್ಲಿರುವಂತೆ ಮಾಡಿಕೊಳ್ಳಬೇಕು. ನಂತರ ಒಂದೊಂದೇ ಬೆರಳುಗಳನ್ನು ಕೆಲ ಕಾಲ ಪೊಸಿಷನ್ʻನಲ್ಲಿ ಇಟ್ಟುಕೊಳ್ಳಬೇಕು. ಆದರೆ ಗ್ರಿಪ್ ಬಿಡಬಾರದು. ಇದನ್ನು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವುದಕ್ಕೆ, ಆಂತರಿಕ ಶಕ್ತಿ ಉದ್ಧೀಪನಕ್ಕೆ ಮಾಡುವ ಯೋಗ ಮುದ್ರೆ.