ಅಕ್ಟೋಬರ್ 2. ಮಹಾತ್ಮ ಗಾಂಧೀಜಿ ಜಯಂತಿ ಹಾಗೂ ಭಾರತದ 2ನೇ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತ. ಈ ಎರಡರ ಜೊತೆಗೆ ಆ ದಿನ ಅಮಾವಾಸ್ಯೆಯೂ ಇದೆ. ಬರೀ ಅಮಾವಾಸ್ಯೆ ಅಲ್ಲ. ಸರ್ವ ಪಿತೃ ಅಮಾವಾಸ್ಯೆ ಗ್ರಹಣ ಸಂಭವಿಸಲಿದೆ. ಇದು ಭಾರತದಲ್ಲಿ ಗೋಚರವಾಗುವುದಿಲ್ಲ. ಆದರೆ, ರ್ವಪಿತೃ ಅಮಾವಾಸ್ಯೆಯಂದು ಪಿತೃಕರ್ಮವನ್ನು ಮಾಡುವ ಭಾರತೀಯರು ವಿಶೇಷವಾಗಿ ಗ್ರಹಣ ನಿಯಮಗಳನ್ನು ಪಾಲಿಸಬೇಕು ಎನ್ನುತ್ತಿದೆ ಪಂಚಾಂಗ.
ಸೂರ್ಯಗ್ರಹಣವು ಕನ್ಯಾರಾಶಿಯಲ್ಲಿ ಸಂಭವಿಸಲಿದೆ. ಗ್ರಹಣದ ಸಮಯದಲ್ಲಿ, ರಾಹುವು ಸೂರ್ಯನ ಸಂಪೂರ್ಣ ದೃಷ್ಟಿಯನ್ನು ಹೊಂದಿರುತ್ತದೆ. ಇದಲ್ಲದೆ, ಸೂರ್ಯನ ಷಡಾಷ್ಟಕ ಯೋಗವು ಶನಿಯೊಂದಿಗೆ ಉಳಿಯುತ್ತದೆ ಮತ್ತು ಕೇತು ಕೂಡ ಸೂರ್ಯನೊಂದಿಗೆ ಇರುತ್ತದೆ. ಹಾಗಾಗಿ ವೃಶ್ಚಿಕ ರಾಶಿ ಸೇರಿದಂತೆ 5 ರಾಶಿಯವರಿಗೆ ವರ್ಷದ ಕೊನೆಯ ಸೂರ್ಯಗ್ರಹಣವು ತುಂಬಾ ಅಪಾಯಕಾರಿ ಎಂದು ಪರಿಗಣಿಸಲಾಗಿದೆ.
ಮೇಷ ರಾಶಿ :
ಸೂರ್ಯಗ್ರಹಣವು ಜೀವನದಲ್ಲಿ ನೆಗೆಟಿವ್ ಪರಿಣಾಮಗಳನ್ನು ಹೆಚ್ಚಿಸುತ್ತದೆ. ವ್ಯಾಪಾರ-ವ್ಯವಹಾರದಲ್ಲಿ ಹಣಕಾಸಿನ ನಷ್ಟದ ಸಾಧ್ಯತೆಯಿದೆ. ಕೆಲವು ಕಾರಣಗಳಿಂದ ಅನಗತ್ಯ ವೆಚ್ಚಗಳು ಹೆಚ್ಚಾಗಲಿವೆ. ಕೆಲವು ಪಿತೂರಿಗಳೂ ನಡೆಯಬಹುದು. ಘರ್ಷಣೆಗಳಿಂದ ದೂರ ಇರಿ. ವಾದಗಳನ್ನು ತಪ್ಪಿಸಿಕೊಳ್ಳಿ. ವೇಗದ ಡ್ರೈವಿಂಗ್ನ್ನು ತಪ್ಪಿಸಿ. ನಿಮ್ಮ ವಿರುದ್ಧ ಒಂದು ದೊಡ್ಡ ಷಡ್ಯಂತ್ರವೇ ನಡೆಯುವ ಸಾಧ್ಯತೆ ಇವೆ.
ಮಿಥುನ ರಾಶಿ :
ಮಿಥುನ ರಾಶಿಯವರಿಗೆ ಇದು ಶುಭ ತರಲಿದೆಯಂತೆ. ಆದರೆ ಅಂತ್ಯದಲ್ಲಿ ಮಾತ್ರ. ಗ್ರಹಣದ ವೇಳೆ ಅಪಾಯಗಳಿದ್ದೇ ಇವೆ. ಆರೋಗ್ಯವು ಇದ್ದಕ್ಕಿದ್ದಂತೆ ಹದಗೆಡಬಹುದು. ಆರ್ಥಿಕ ಸಮಸ್ಯೆಗಳು ಡಬಲ್ ಆಗಬಹುದು. ಮುಗಿದು ಹೋಗಿದ್ದ ಕೆಲಸಗಳೂ ಸಮಸ್ಯೆ ತರಬಹುದು. ವಿನಾಕಾರಣ ಕಾನೂನು ಪ್ರಕರಣ ಎದುರಿಸಿ, ದಂಡ ಕಟ್ಟಬಹುದು. ಅವಮಾನ ಮತ್ತು ಸೋಲನ್ನು ಎದುರಿಸಬೇಕಾಗಬಹುದು. ನಿಮ್ಮ ಆರೋಗ್ಯವನ್ನು ಹುಷಾರಾಗಿ ನೋಡಿಕೊಳ್ಳಿ. ಆದರೆ ಅಂತಿಮವಾಗಿ ಇವುಗಳೆಲ್ಲ ಶುಭವಾಗಿ ಬದಲಾಗಲಿವೆ.
ಕಟಕ ರಾಶಿ :
ಸೂರ್ಯಗ್ರಹಣದ ಅಶುಭ ಪರಿಣಾಮಗಳ ಅನಗತ್ಯ ಸಮಸ್ಯೆಗಳು ಹೆಚ್ಚಾಗಬಹುದು. ವೃತ್ತಿಜೀವನದಲ್ಲಿ ವಿನಾಕಾರಣ ಕಿರುಕುಳ ಎದುರಿಸುತ್ತೀರಿ. ಕೆಲಸ ಮತ್ತು ಯೋಜನೆಗಳಲ್ಲಿ ಯಶಸ್ವಿಯಾಗಲು ಕಷ್ಟಪಟ್ಟು ಕೆಲಸ ಮಾಡಬೇಕು. ಸ್ನೇಹಿತರು ಮತ್ತು ಮೇಲಧಿಕಾರಿಗಳ ಜೊತೆ ವಾದಕ್ಕೆ ಬೀಳಬೇಡಿ. ಅವರು ಹೇಳಿದ್ದ ಸಲಹೆಗಳನ್ನ ಕೇಳಿ. ಮಕ್ಕಳೊಂದಿಗೆ ಭಿನ್ನಾಭಿಪ್ರಾಯ ಉಂಟಾಗಬಹುದು. ಸಂಸಾರವೇ ಸಾಕಪ್ಪ ಎಂಬ ಭಾವನೆ ಬರಬಹುದು. ಯಾರನ್ನೂ ಕುರುಡರಾಗಿ ನಂಬಬೇಡಿ. ಆತುರದ ನಿರ್ಧಾರ ಬೇಡವೇ ಬೇಡ.
ವೃಶ್ಚಿಕ ರಾಶಿ :
ಸೂರ್ಯಗ್ರಹಣದಿಂದಾಗಿ, ವೃಶ್ಚಿಕ ರಾಶಿಯರಲ್ಲಿ ಹಠಾತ್ ಆರ್ಥಿಕ ಸಮಸ್ಯೆಗಳು ಬರಬಹುದು ಹಣದ ಕಾರಣದಿಂದಾಗಿಯೇ ಕೆಲಸಗಳು ಹಾಳಾಗಬಹುದು. ನೆಗೆಟಿವ್ ಧೋರಣೆ, ಹತಾಶೆ ಹೆಚ್ಚಲಿದೆ. ಜೂಜು, ಬೆಟ್ಟಿಂಗ್ ಹತ್ತಿರಕ್ಕೂ ಹೋಗಬೇಡಿ. ಅದು ಯಾವಾಗಲೂ ಅಪಾಯಕಾರಿಯೇ, ಈ ಸಮಯದಲ್ಲಂತೂ ಬೇಡವೇ ಬೇಡ. ಯಾವುದೇ ಒಪ್ಪಂದಕ್ಕೆ ಸಹಿ ಮಾಡುವ ಮೊದಲು, ಅದನ್ನು ಸಂಪೂರ್ಣವಾಗಿ ಓದಿ. ಮಕ್ಕಳ ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ.
ಮೀನ ರಾಶಿ :
ಮೀನ ರಾಶಿಯವರಿಗೆ, ಸೂರ್ಯಗ್ರಹಣವು ನಿರಾಶೆಯನ್ನು ಹೆಚ್ಚಿಸುತ್ತದೆ. ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವುದಕೆ ಆಗುವುದಿಲ್ಲ. ಆರೋಗ್ಯದ ವಿಷಯಕ್ಕೆ ಬಂದರೆ, ಮಾನಸಿಕ ಒತ್ತಡವೇ ಹೆಚ್ಚಾಗಲಿದೆ. ಹೊಸ ಯೋಜನೆಗಳನ್ನು ಕೆಲವು ದಿನಗಳಮಟ್ಟಿಗೆ ಮುಂದೂಡಿ. ಯಾವುದೇ ಕಾರಣ ಇಲ್ಲದೆ ಅನಗತ್ಯ ಖರ್ಚುಗಳನ್ನು ಭರಿಸಬೇಕಾಗಬಹುದು. ಹೊಸ ಹೂಡಿಕೆಗಳು ಸದ್ಯಕ್ಕೆ ಬೇಡ.
ಇದು ಗ್ರಹಣದ ಫಲಾಫಲ ನೋಡಿದಾಗ ಎಚ್ಚರಿಕೆಯಿಂದ ಇರಬೇಕಾದ 5 ರಾಶಿಗಳ ವಿವರ ಮಾತ್ರ.