ಸೈಮಾ ಪ್ರಶಸ್ತಿಯಲ್ಲಿ ದರ್ಶನ್ ಕೊನೆಗೂ ಗೆದ್ದಿದ್ದಾರೆ. ಅವರನ್ನೂ ಮೀರಿಸಿರುವುದು ರಕ್ಷಿತ್ ಶೆಟ್ಟಿ. ಇದರ ನಡುವೆ ನಟ ದುನಿಯಾ ವಿಜಯ್ ತೆಲುಗು ಚಿತ್ರರಂಗದಲ್ಲಿ ಶೈನ್ ಆಗಿದ್ದರೆ, ಶಿವ ರಾಜ್ ಕುಮಾರ್ ಜೀವಮಾನ ಸಾಧನೆ ಪ್ರಶಸ್ತಿ ಪಡೆದಿದ್ದಾರೆ. ಫಿಲ್ಮ್ ಫೇರ್ ಅವಾರ್ಡ್ ಘೋಷಣೆಯಾದಾಗ ದರ್ಶನ್ ಅವರ ಕಾಟೇರ ಪ್ರಶಸ್ತಿ ಭಾಗ್ಯ ತಪ್ಪಿಸಿಕೊಂಡಿತ್ತು. ಕಾಟೇರ ಚಿತ್ರಕ್ಕೆ ಯಾವುದೇ ಪ್ರಶಸ್ತಿ ಸಿಕ್ಕಿರಲಿಲ್ಲ. ಇದು ಅಭಿಮಾನಿಗಳ ಬೇಸರಕ್ಕೂ ಕಾರಣವಾಗಿತ್ತು. ಅಲ್ಲದೆ ಇದಕ್ಕೆಲ್ಲ ದರ್ಶನ್ ಅವರು ಕೊಲೆ ಕೇಸಿನಲ್ಲಿ ಆರೋಪಿಯಾಗಿ ಜೈಲು ಸೇರಿರುವುದೇ ಕಾರಣ ಎಂದು ವಿಶ್ಲೇಷಣೆ ಮಾಡಲಾಗಿತ್ತು. ಆದರೆ, ಸೈಮಾದಲ್ಲಿ ಪ್ರಶಸ್ತಿಗಳು ಸಿಕ್ಕಿವೆ. ಆದರೆ, ಒಟ್ಟಾರೆ ಪ್ರಶಸ್ತಿಯಲ್ಲಿ ಕಾಟೇರ ಚಿತ್ರಕ್ಕಿಂತ ರಕ್ಷಿತ್ ಶೆಟ್ಟಿಯವರ ಸಪ್ತಸಾಗರದಾಚೆ ಎಲ್ಲೋ ಚಿತ್ರವೇ ಹೆಚ್ಚು ಪ್ರಶಸ್ತಿ ಪಡೆದುಕೊಂಡಿದೆ.
ಸೈಮಾ ಅವಾರ್ಡ್-2024 ಘೋಷಣೆಯಾಗಿದೆದ್ದು,19 ಪ್ರಶಸ್ತಿಗಳಲ್ಲಿ ಕಾಟೇರಕ್ಕೆ 4 ಹಾಗೂ ಸಪ್ತ ಸಾಗರದಾಚೆ ಎಲ್ಲೋ ಚಿತ್ರಕ್ಕೆ 5 ಪ್ರಶಸ್ತಿಗಳು ಲಭಿಸಿವೆ. ದುನಿಯಾ ವಿಜಯ್ ಅವರು ತೆಲುಗಿನಲ್ಲಿ ಅತ್ಯುತ್ತಮ ಖಳನಾಯಕ ಪ್ರಶಸ್ತಿ ಪಡೆದಿದ್ದಾರೆ.
ಕಾಟೇರ ಚಿತ್ರಕ್ಕೆ..
ಅತ್ಯತ್ತಮ ಸಿನಿಮಾ ಪ್ರಶಸ್ತಿ ಹಾಗೂ ಆರಾಧನಾ ರಾಮ್ ಅವರಿಗೆ ಉತ್ತಮ ಚೊಚ್ಚಲ ನಟಿ ಪ್ರಶಸ್ತಿ ಲಭಿಸಿದೆ. ಉತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ವಿ ಹರಿಕೃಷ್ಣ ಪಾಲಾಗಿದ್ದರೆ, ಉತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿ ಪಸಂದಾಗವ್ನೆ ಹಾಡಿಗಾಗಿ ಮಂಗ್ಲಿ ಅವರಿಗೆ ಲಭಿಸಿದೆ.
ದರ್ಶನ್ ಅವರ ಕಾಟೇರವನ್ನೂ ಮೀರಿ ಅತೀ ಹೆಚ್ಚು ಪ್ರಶಸ್ತಿ ಪಡೆದಿರುವದು ರಕ್ಷಿತ್ ಶೆಟ್ಟಿಯವರ ಸಪ್ತಸಾಗರದಾಚೆ ಎಲ್ಲೋ.. ಚಿತ್ರ. ಸಪ್ತಸಾಗರದಾಚೆ ಎಲ್ಲೋ ಚಿತ್ರಕ್ಕೆ ರಕ್ಷಿತ್ ಶೆಟ್ಟಿ ಅವರೇ ಪ್ರೊಡ್ಯೂಸರ್.
ಉತ್ತಮ ನಟರಾಗಿ ರಕ್ಷಿತ್ ಶೆಟ್ಟಿ ಪ್ರಶಸ್ತಿ ಪಡೆದಿದ್ದರೆ, ಉತ್ತಮ ನಿರ್ದೇಶಕರಾಗಿ ಹೇಮಂತ್ ರಾವ್ ಅವಾರ್ಡು ಪಡೆದುಕೊಂಡಿದ್ದಾರೆ.
ವಿಮರ್ಶಕರ ಪ್ರಶಸ್ತಿಯನ್ನು ಉತ್ತಮ ನಟಿ ರುಕ್ಮಿಣಿ ವಸಂತ್ ಅವರಿಗೆ ಸಂದಿದ್ದರೆ, ಇದೇ ಚಿತ್ರಕ್ಕೆ ರಮೇಶ್ ಇಂದಿರಾ, ಉತ್ತಮ ಖಳನಾಯಕ ಪ್ರಶಸ್ತಿ ಪಡೆದಿದ್ದಾರೆ. ಉತ್ತಮ ಹಿನ್ನೆಲೆ ಗಾಯಕ: ಕಪಿಲ್ ಕಪಿಲನ್ ಅವರಿಗೆ ಸಪ್ತಸಾಗರದಾಚೆ ಎಲ್ಲೋ ಹಾಡಿಗೆ ಸಂದಿದೆ. ಒಟ್ಟಾರೆ 5 ಪ್ರಶಸ್ತಿ ಲಭ್ಯವಾಗಿವೆ.
ಉಳಿದಂತೆ
ಉತ್ತಮ ಚೊಚ್ಚಲ ನಿರ್ದೇಶಕ ಪ್ರಶಸ್ತಿ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರಕ್ಕಾಗಿ ನಿತಿನ್ ಕೃಷ್ಣಮೂರ್ತಿ ಅವರಿಗೆ ಸಿಕ್ಕಿದೆ. ಉತ್ತಮ ನಟಿ ಪ್ರಶಸ್ತಿ ಚೈತ್ರಾ ಜೆ ಆಚಾರ್ ಅವರಿಗೆ ಟೋಬಿ ಚಿತ್ರಕ್ಕಾಗಿ ಸಿಕ್ಕಿದೆ.
ಉತ್ತಮ ನಟ : (ಕ್ರಿಟಿಕ್ಸ್) ಧನಂಜಯ್ (ಗುರುದೇವ್ ಹೊಯ್ಸಳ)
ಉತ್ತಮ ಚೊಚ್ಚಲ ಕಲಾವಿದ: ಶಿಶಿರ ಬೈಕಡಿ (ಡೇರ್ ಡೆವಿಲ್ ಮುಸ್ತಫಾ)
ಉತ್ತಮ ಚೊಚ್ಚಲ ನಿರ್ಮಾಣ: ಕೈವ (ಅಭುವನಸ ಫಿಲಮ್ಸ್)
ಉತ್ತಮ ಸಾಹಿತ್ಯ: ಧನಂಜಯ್ (ಟಗರು ಪಲ್ಯ)
ಉತ್ತಮ ಪೋಷಕ ನಟ: ನವೀನ್ ಶಂಕರ್ (ಹೊಂದಿಸಿ ಬರೆಯಿರಿ)
ಉತ್ತಮ ಪೋಷಕ ನಟಿ: ಸಂಯುಕ್ತ ಹೊರನಾಡು (ಟೋಬಿ)
ಉತ್ತಮ ಹಾಸ್ಯ ನಟ: ಅನಿರುದ್ದ ಆಚಾರ್ಯ (ಆಚಾರ್ಯ & ಕೋ)
ವರ್ಷದ ಅತ್ಯುತ್ತಮ ನಿರ್ಮಾಪಕ: ಪಿಬಿ ಸ್ಟುಡಿಯೋಸ್, ಅನ್ವಿತ್ ಸಿನಿಮಾಸ್ ಪ್ರಶಸ್ತಿ ಸ್ವೀಕರಿಸಿದ್ದಾರೆ.
ಶಿವ ರಾಜ್ ಕುಮಾರ್ ಅವರ 50 ವರ್ಷಗಳ ಕಲಾಸೇವೆಗೆ ವಿಶೇಷ ಪ್ರಶಸ್ತಿ ನೀಡಿ ಗೌರವಿಸಿದೆ ಸೈಮಾ.
ವಿಶೇಷ ಅಂದ್ರೆ ತೆಲುಗು ಚಿತ್ರರಂಗದಲ್ಲಿ ಬೆಸ್ಟ್ ಖಳನಾಯಕ ಪ್ರಶಸ್ತಿಯನ್ನು ದುನಿಯಾ ವಿಜಯ್ ಪಡೆದಿದ್ದಾರೆ. ವೀರ ನರಸಿಂಹ ರೆಡ್ಡಿ ಚಿತ್ರದಲ್ಲಿ ಬಾಲಕೃಷ್ಣ ಎದುರು ಖಳನಾಯಕರಾಗಿ ಅಬ್ಬರಿಸಿದ್ದ ವಿಜಯ್, ಪ್ರಶಸ್ತಿ ಪಡೆದಿದ್ದಾರೆ. ಅಷ್ಟೇ ಅಲ್ಲ, ದಿಯಾ ಚಿತ್ರದ ಮೂಲಕ ಕನ್ನಡಿಗರ ಹೃದಯ ಗೆದ್ದ ದೀಕ್ಷಿತ್ ಶೆಟ್ಟಿ ದಸರಾ ಚಿತ್ರದಲ್ಲಿನ ತಮ್ಮ ಅಭಿನಯಕ್ಕೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯನ್ನು ಪಡೆದರೆ, ಕೆ.ಜಿ.ಎಫ್ ಚಿತ್ರದ ಮೂಲಕ ಬೆಳಕಿಗೆ ಬಂದು ಸಲಾರ್ ಸಾಮ್ರಾಜ್ಯವನ್ನು ತಮ್ಮ ಕ್ಯಾಮರಾ ಕಣ್ಣಿನಲ್ಲಿ ಸೆರೆ ಹಿಡಿದ ಭುವನ್ ಗೌಡ ಅತ್ಯುತ್ತಮ ಸಿನಿಮಾಟೊಗ್ರಫರ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.